Monday, 18 April 2016

ಮನದ ಮಾತು:-

ಜೋಡಿಹಕ್ಕಿ ರೆಕ್ಕೆಯ ಗಾಳಿಯೆ ಹುಡುಕಿ ಆರಿದಂತೆ
ಅನುರಾಗ ಬಯಸಿ ಬಂದ ದುಂಬಿಯ ಹೂವೆ ಇರಿದಂತೆ
ದಾರಿಯೆ ಎದುರಾಗಿ ನಿಂತು ದಿಕ್ಕನ್ನೆ ದಿಕ್ಕು ತಪ್ಪಿಸಿದಂತೆ
ನೀರೆ ಬಾಯಾರಿ ಕಡಲನ್ನೆ ಬರಿದು ಮಾಡಿದಂತೆ
ಅಮೃತ ಉಣಿಸೊ ತಾಯೆ ಕಂದನ ಕೊಂದಂತೆ
ಹಿಮ ಬೀರುವ ಚಂದ್ರ ಬೆಂಕಿಯ ಮಳೆಗರೆದಂತೆ
ಜಗ ಕಯ್ವ ದೈವವೆ ಮನುಜನ ಶಿರ ಕಡಿದಂತೆ
ಸುರ ಪಾನವೆ ಅಸುರರ ಹುಡುಕಿ ಕರೆದಂತೆ
ಚಲುವಿನೊಲವೆ, ನನ್ನೆದೆಯ ಮನೆಗೆ ನಿ ಬೆನ್ನು ಮಾಡಿ ನಿಲ್ಲಲು  ಮನದಳದಲಿ ನೋವಿನ ತರಂಗ ತಳಮಳ.......|||

- ಮುಕಮಾಸು

No comments:

Post a Comment