ಮೌಲ್ಯ ನಿ ಅಪರೂಪ, ಅಮೂಲ್ಯ
ಬರಿಬೇಕು ನೀನಗೊಂದು ಸುಂದರ ಕಾವ್ಯ.
ಸದ್ಯಕ್ಕೆ ಇರಿಸಿಕೊ ಈ ಸಣ್ಣದೊಂದು ಕವನ
ನಿನ್ನ ಸೃಷ್ಟಿಸಿದ ಭಗವಂತನಿಗಿರಲಿ ನನ್ನ ನಮನ.
ಬಯಸಿದೆ ಮನಸು ಬರೆಯಲು ಬಾಳ ಮುನ್ನುಡಿಯ, ತನ್ನ ತಾ ಕಂಡು ನಿನ್ನ ಕಣ್ಕನ್ನಡಿಯಲಿ
ನಿನಿದ್ದೆ ಬಲಬದಿಯಲಿ, ನಾ ದಿಟ್ಟಿಸಲಿಲ್ಲ, ಆದರೂ ಬರೆದೆ ಹೇಗೆ, ಏಕೆ...? ಅಳಿಸಲಾಗದ ನಿನ್ನ ಚಿತ್ರವ ನನ್ನ ಕಣ್ಣಲಿ.
ಮರೆಸಿತು ಮನಸ ಕೆಲ ಕಾಲ ಕಂಡಮೇಲಂತೂ, ಮಲ್ಲಿಗೆ ದಿಂಡ ಮೇಲಿನ ದುಂಬಿಯಂತ ಕಾರಳ್ಳನಾ ನಾಸಿಕದ ಕೇಳಗೆ
ನಿ ಯೋಚಿಸಿ, ನಾಚಿ, ಉತ್ತರಿಸಿದ ಪರಿಯದು, ಕಡಲಾಳದಲಿ ಚಿಪ್ಪೊಂದು ಬಾಯ್ತೆರೆದು ಮುತ್ತನು ಮುದ್ದಿಸಿದಂತೆ ಮೆಲ್ಲಗೆ.
- ಮುಕಮಾಸು
No comments:
Post a Comment